ಕಲಬುರ್ಗಿ ನಗರದರಿಂಗ್ ರಸ್ತೆ ಸಮೀಪದ ಇಟ್ಟಿಗೆ ಗೂಡು ಆವರಣದಲ್ಲಿ ನಿಂತ ಮಳೆ ನೀರಿನಲ್ಲಿ ಇಟ್ಟಿಗೆಗಳು ಒದ್ದೆಯಾದವು. ಸೂರಿನ ಭರವಸೆ ಸಿಗದಾಯಿತು. ಆದರೆ, ಆಶಾಭಾವ ಕುಂದಿಲ್ಲ ಎಂಬುದಕ್ಕೆ ಈ ಮಕ್ಕಳೇ ಸಾಕ್ಷಿಯಾದರು.
ಮೊಣಕಾಲಿನಷ್ಟು ನೀರಿದ್ದರೇನುಧೈರ್ಯಗೆಡದೇ ಮುನ್ನಡೆಯೋಣ. ಹಸಿ ಇಟ್ಟಿಗೆಯಲ್ಲೇ ಸೂರು ಕಟ್ಟಿಕೊಂಡು ಬದುಕು ರೂಪಿಸಿಕೊಳ್ಳೋಣ ಎಂಬಂತೆ ಅಕ್ಕ ತಳ್ಳುಗಾಡಿಯ ಹಿಡಿಕೆಯನ್ನು ಹಿಡಿದು ಹೆಜ್ಜೆ ಹಾಕಿದರೆ, ಅದನ್ನು ತಳ್ಳುತ್ತ ತಮ್ಮ ಸಾಥ್ ನೀಡಿದ. ಅವರಿಬ್ಬರಿಗೂ ಜೊತೆಯಾಗಲು ಇನ್ನೊಬ್ಬ ಬಾಲಕ ಯೋಚಿಸತೊಡಗಿದ.